ಹೊಂಬಾಳೆ ಫಿಲ್ಮ್ಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ, ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಮಾಸ್ಟರ್ ಪೀಸ್ ಚಿತ್ರ ನಾಳೆಯಿಂದ ತೆರೆಗೆ ಬರುತ್ತಿದೆ.
ಸಂಭಾಷಣೆಕಾರರಾಗಿ ಖ್ಯಾತಿ ಪಡೆದಿದ್ದ ಮಂಜು ಮಾಂಡವ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರ ಮಾಸ್ಟರ್ ಪೀಸ್.
ಯುವ ಜನತೆ ಹೇಗೆಲ್ಲಾ ಭ್ರಮೆಯಲ್ಲಿರುತ್ತಾರೆ, ಬದುಕುವ ದಾರಿ ಬಿಟ್ಟು ಅನ್ಯ ಮಾರ್ಗಗಳನ್ನು ಅರಸಿ ಹೋಗುತ್ತಾರೆ. ಹಾಗೆ ದಾರಿ ತಪ್ಪಿದರೆ ಆಗುವ ಅನಾಹುತಗಳೇನು? ಎನ್ನುವುದರ ಜೊತೆಗೆ ಯುವ ಪೀಳಿಗೆ ಬದುಕಬೇಕಾದ ರೀತಿ ಯಾವುದು ಎಂಬ ಮುಖ್ಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾವನ್ನು ರೂಪಿಸಲಾಗಿದೆ.
ನಾಳೆಯಿಂದ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಮಾಸ್ಟರ್ ಪೀಸ್ ಚಿತ್ರ ಕಾಮಿಡಿ, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರಿಗೂ ಬೇಕಾದ ಅಂಶಗಳಿವೆ. ಯಶ್ ಜೊತೆ ಚಿಕ್ಕಣ್ಣ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಕಥೆ-ಚಿತ್ರಕತೆ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ, ಎಸ್. ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ.